ಶ್ರೀ ದುರ್ಗಾಪರಮೇಶ್ವರಿ
ಯಜ್ಞಶಾಲೆ (ರಿ.)
ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆ, ಹಿರಿಯಡ್ಕ. ಈ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜಕ್ಕಾಗಿ ಮತ್ತು ಸಮಾಜದ ಜೊತೆಯಾಗಿ ಭಗವಂತನ ಆರಾಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಲ್ಲಿ ಹಲವಾರು ಯಜ್ಞ ಯಾಗಾಧಿಗಳನ್ನು ಭಕ್ತರ ಒಳಿತಿಗಾಗಿ ನಡೆಸಲು ಸುಸಜ್ಜಿತ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಂಸ್ಕೃತಿಕ ಹಾಗು ವೈಧಿಕ ಕಾರ್ಯಗಳೊಂದಿಗೆ ಸಮಾಜಕ್ಕೆ ಒಳಿತಾಗುವಂತ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುತ್ತದೆ.
About us
ಪರಿಕಲ್ಪನೆ, ಸಂಕಲ್ಪ ಮತ್ತು ದೂರದೃಷ್ಟಿ
ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯು ಧಾರ್ಮಿಕ ಚಟುವಟಿಕೆಗಳಿಗೆ ಉನ್ನತ ಮಟ್ಟದ ವೇಧಿಕೆಯಾಗಿ ನಿಂತಿದೆ. ಸಾಮುದಾಯಿಕ ಪ್ರಾರ್ಥನೆಗಳು, ಭಜನೆಗಳು, ಸಾಂಸ್ಕೃತಿಕ ಆಚರಣೆಗಳು, ಪ್ರವಚನಗಳು, ಓದುವಿಕೆ ಮತ್ತು ಧ್ಯಾನವನ್ನು ಒಳಗೊಂಡಿದೆ. ಇಲ್ಲಿ ಪ್ರಮುಖವಾಗಿ ಮಹಾ ಶಿವರಾತ್ರಿ , ರಾಮ ನವಮಿ , ಕೃಷ್ಣ ಅಷ್ಟಮಿ ಮತ್ತು ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ.
ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಚಟುವಟಿಕೆಗಳು, ಗ್ರಾಮೀಣ ಉನ್ನತಿ, ಸಮಾಜ ಕಲ್ಯಾಣ, ಯುವ ಸಬಲೀಕರಣ, ಆಧ್ಯಾತ್ಮಿಕ ಬೋಧನೆಗಳು ಮತ್ತಿತರ ಕಾರ್ಯಗಳಲ್ಲಿ ಸ್ವಹಿತಾಸಕ್ತಿಗಳಿರದೆ ಸಮಾಜಕ್ಕೆ ತಾವು ದುಡಿದಿದ್ದರಲ್ಲಿ ಏನನ್ನಾದರೂ ನೀಡುವ ಮನೋಧರ್ಮದ, ಸಧೃಡ ಸಮಾಜ ಕಟ್ಟುವ ಕನಸನ್ನು ನನಸು ಮಾಡುವ ಸುಮನಸ್ಕರ ಕೂಟವಿದಾಗಿದ್ದು. ಸಹಕರಿಸುವ ಪ್ರತಿಯೊಬ್ಬರಿಗೂ ನಮನ, ನಮ್ಮೊಂದಿಗೆ ಜೊತೆಯಾಗಲು ಇಚ್ಛಿಸುವವರಿಗೆ ಆತ್ಮೀಯ ಸ್ವಾಗತ.
OUR SERVICES
ಕಾರ್ಯಕ್ರಮ ಮತ್ತು ಕಾರ್ಯಾಗಾರಗಳು
ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯ ಪಡಸಾಲೆಯಲ್ಲಿ ಕೇವಲಪೂಜೆ - ಪುನಸ್ಕಾರ, ಹೋಮ ಹವನಾಧಿಗಳಷ್ಟೇ ಅಲ್ಲದೆ. ಹತ್ತು ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ - ಆನ್ಲೈನ್ ಮುಖಾಂತರ ಉಚಿತ ಸಂಸ್ಕೃತ ಭಾಷಾ ತರಭೇತಿ ಮತ್ತು ಪ್ರಮಾಣ ಪತ್ರ ವಿತರಣೆ.
Our Team
ಸದಸ್ಯರು ಮತ್ತು ಅಧ್ಯಾಪಕ ವೃಂದ
ಮಾರ್ಗದರ್ಶಕರು

ಮಾರ್ಗದರ್ಶಕರು
M.A ಸಂಸ್ಕೃತ
ಅಧ್ಯಕ್ಷರು

ವಿದ್ವಾನ್ ಅಜಿತ ಆಚಾರ್ಯ
M.A ಸಂಸ್ಕೃತ















